``ಕಲೆಗೆ ಸಲ್ಲುವ ಗೌರವವೇ ಸಮ್ಮಾನ`` : ಕುಂಬ್ಳೆ ಸುಂದರ ರಾವ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 7 , 2015
|
ಫೆಬ್ರವರಿ 7, 2015
|
``ಕಲೆಗೆ ಸಲ್ಲುವ ಗೌರವವೇ ಸಮ್ಮಾನ`` : ಕುಂಬ್ಳೆ ಸುಂದರ ರಾವ್
ಬೆಳ್ತಂಗಡಿ :
ಸಮ್ಮಾನ ಎಂದರೆ ವ್ಯಕ್ತಿಗೆ ನೀಡುವುದಲ್ಲ. ಕಲಾವಿದನೊಳಗಿರುವ ಕಲೆಗೆ ಸಲ್ಲುವ ಗೌರವ ಎಂದು ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ಹೇಳಿದರು.
ಅವರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಆಶ್ರಯದಲ್ಲಿ ಗುರುವಾರ ರಾತ್ರಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಸುವರ್ಣ ಆರ್ಕೇಡ್ನ ಆವರಣದಲ್ಲಿ ನಡೆದ ಸುವರ್ಣ ರಂಗ ಸಮ್ಮಾನ್ ಕಾರ್ಯಕ್ರಮದಲ್ಲಿ ಸಮ್ಮಾನ ಸೀÌಕರಿಸಿ ಮಾತನಾಡಿದರು.
ಕಲೆಯಿಂದ ದೂರವುಳಿದು ರಾಜಕೀ ಯದಲ್ಲಿದ್ದೆ. ವಯೋಸಹಜತೆಯಿಂದಾಗಿ ರಾಜಕೀಯದಲ್ಲೂ ಸಕ್ರಿಯನಾಗಲು ಈಗ ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ ಕಲಾವಿದನನ್ನು ನೆನಪಿಟ್ಟು ಗುರುತಿಸಿ ಗೌರವಿಸುವ ಗುಣ ನಿಮ್ಮಲ್ಲಿರುವುದು ಸಂತಸ ತಂದಿದೆ ಎಂದರು.
ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಅರವಿಂದ ಬೋಳಾರ್, ಖ್ಯಾತ ನಾಟಕ ಕಲಾವಿದ ಸುಂದರ ರೈ ಮಂದಾರ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಗೌರವಾಧ್ಯಕ್ಷ ನಾಣ್ಯಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಉಜಿರೆ ಎಸ್ಡಿಎಂ ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕ ಡಾ| ಬಿ. ಎ. ಕುಮಾರ ಹೆಗ್ಡೆ, ದ.ಕ. ಜಿಲ್ಲಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶ್ರೀಕಾಂತ ಕಾಮತ್, ವಿನಾಯಕ ರೈಸ್ ಮಿಲ್ನ ಪಾಲುದಾರ ಚಂದ್ರಕಾಂತ ಕಾಮತ್ ಉಪಸ್ಥಿತರಿದ್ದರು.
ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಕೃಪೆ :
http://udayavani.com
|
|
|